ಮಂಡ್ಯ: L/NK ಜನಾರ್ಧನ್ ಗೌಡ K.P ರವರು ಇಂದು ಹೃದಯಾಘಾತದಿಂದ ನಿಧನ

23 June, 2023
ಮಂಡ್ಯ: L/NK ಜನಾರ್ಧನ್ ಗೌಡ K.P ರವರು ಇಂದು ಹೃದಯಾಘಾತದಿಂದ ನಿಧನ ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮವಾಸಿ ಹಾಗೂ 27 MECH INF Unit ನಲ್ಲಿ ಸೇವೆ ಸಲ್ಲಿಸುತ್ತಿದ್ದ L/NK ಜನಾರ್ಧನ್ ಗೌಡ K.P ರವರು ಇಂದು ಹೃದಯಾಘಾತದಿಂದ ಮರಣ ಹೊಂದಿರುತ್ತಾರೆ. ಅವರ ಪಾರ್ಥೀವ ಶರೀರವನ್ನು ನಾಳೆ 24 ಜೂನ್ ರಂದು ಅವರ ಸ್ವಗೃಹ ಕಿಕ್ಕೇರಿಗೆ ತರಲಾಗುತ್ತಿದೆ, ಹಾಗೂ ಅವರ ಅಂತಿಮಕ್ರಿಯೆಯನ್ನು ಕಿಕ್ಕೇರಿ ಯಲ್ಲಿ ನಡೆಸಲಾಗುವುದು‌.

ಕಣ್ಣು ಗುಡ್ಡೆ ಕಿತ್ತು ಬಂದರೂ..!! ಕರಡಿ ಯೊಂದಿಗೆ ಹೋರಾಡಿ ಜೀವ ಉಳಿಸಿಕೊಂಡ ವೃದ್ಧ... !!!

22 June, 2023
ಕಣ್ಣು ಗುಡ್ಡೆ ಕಿತ್ತು ಬಂದರೂ..!! ಕರಡಿ ಯೊಂದಿಗೆ ಹೋರಾಡಿ ಜೀವ ಉಳಿಸಿಕೊಂಡ ವೃದ್ಧ... !!! ಉತ್ತರಕನ್ನಡ: 72 ವರ್ಷದ ವ್ಯಕ್ತಿಯೊಬ್ಬರು ಕರಡಿ ದಾಳಿಯಿಂದ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯ್ಡಾ ತಾಲ್ಲೂಕಿನ ಜಗಲ್​ಪೇಟ್​ ವ್ಯಾಪ್ತಿಯ ತಿಂಬಾಲಿ ಗ್ರಾಮದಲ್ಲಿ ನಡೆದಿದೆ. ಘಟನೆಯೂ ಮಧ್ಯಾಹ್ನ 3:30ರ ಸುಮಾರಿಗೆ ಸಂಭವಿಸಿದ್ದು, ಕರಡಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ವಿಠ್ಠಲ್​ ಸಲಾಕೆ(720 ಎಂದು ಗುರುತಿಸಲಾಗಿದ್ದು, ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವಾಗ ಘಟನೆ ಸಂಭವಿಸಿದೆ. ಹೋರಾಡಿ ಜೀವ ಉಳಿಸಿಕೊಂಡ ವ್ಯಕ್ತಿಮಾಲೋರ್ಗಿ ಗ್ರಾಮದ ನಿವಾಸಿಯಾದ ವಿಠ್ಠಲ್​ ಕರಡಿಯೊಂದಿಗೆ ಸುಮಾರು 20 ನಿಮಿಷಗಳ ಕಾಲ ಕಾದಾಡಿ ಜೀವವನ್ನು ಉಳಿಸಿಕೊಂಡಿದ್ಧಾರೆ. ದಾಳಿ ವೇಳೆ ಕರಡಿಯೂ ಅವರ ಒಂದು ಕಣ್ಣನ್ನು ಕಿತ್ತು ಹಾಕಿದ್ದು, ಮತ್ತೊಂದು ಕಣ್ಣನ್ನು ಗಂಭೀರವಾಗಿ ಗಾಯಗೊಳಿಸಿದೆ. ದಾಳಿಯ ವೇಳೆ ಗಾಯಾಳು ಜೋರಾಗಿ ಕೂಗಾಡಿದ್ದರ ಪರಿಣಾಮ ಕರಡಿ ಗಾಬರಿಯಿಂದ ಕಾಡಿನೊಳಗೆ ಓಡಿ ಹೋಗಿದೆ. ಕರಡಿ ದಾಳಿಯಿಂದ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವೃದ್ದ ಸುಮಾರು ಎರಡು ಕಿಲೋಮೀಟರ್​ ದೂರದಲ್ಲಿದ್ದ ತಮ್ಮ…

10, 20 ಸಾವಿರ ಅಲ್ಲವೇ ಅಲ್ಲ.. ತಗಡಿನ ಶೆಡ್​ನಲ್ಲಿರುವ ಅಜ್ಜಿಗೆ ಬಂತು 1 ಲಕ್ಷ ರೂ. ಕರೆಂಟ್ ಬಿಲ್..!

22 June, 2023
10, 20 ಸಾವಿರ ಅಲ್ಲವೇ ಅಲ್ಲ.. ತಗಡಿನ ಶೆಡ್​ನಲ್ಲಿರುವ ಅಜ್ಜಿಗೆ ಬಂತು 1 ಲಕ್ಷ ರೂ. ಕರೆಂಟ್ ಬಿಲ್..! ಕೊಪ್ಪಳ: ರಾಜ್ಯ ಸರ್ಕಾರ 200 ಯೂನಿಟ್ ವರೆಗೆ ವಿದ್ಯುತ್ ಬಿಲ್ ಉಚಿತ ಎಂದು ಘೋಷಣೆ ಮಾಡಿದೆ. ಅಂತೆಯೇ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ವಿದ್ಯುತ್ ಸಂಸ್ಥೆಗಳು ಗ್ರಾಹಕರಿಗೆ ಶಾಕ್ ನೀಡೋದನ್ನು ಮುಂದುವರಿಸಿವೆ. ಉಚಿತ ವಿದ್ಯುತ್​ ಘೋಷಣೆ ಬೆನ್ನಲ್ಲೇ ರಾಜ್ಯದ ಹಲವು ಭಾಗಗಳಲ್ಲಿರುವ ಮನೆಗಳ ಬಿಲ್​​ನಲ್ಲಿ ಈ ಹಿಂದೆ ಕಟ್ಟುತ್ತಿದ್ದ ಹಣಕ್ಕಿಂತ ಹೆಚ್ಚು ತೋರಿಸುತ್ತಿದೆ ಎಂಬ ಆರೋಪ ಕೇಳಿಬರ್ತಿದೆ. ಅದರ ಮುಂದುವರಿದ ಭಾಗವಾಗಿ 90 ವರ್ಷದ ವೃದ್ಧೆಯೊಬ್ಬರ ಮನೆಯ ಕರೆಂಟ್ ಬಿಲ್ ಬರೋಬ್ಬರಿ 1,03,315 ರೂಪಾಯಿ ಬಂದಿದೆ. ಕೊಪ್ಪಳದ ಭಾಗ್ಯನಗರದ ನಿವಾಸಿ ಗೀರಿಜಮ್ಮ ಎಂಬ ವೃದ್ಧೆಯ ಕರೆಂಟ್ ಬಿಲ್ ಒಂದು ಲಕ್ಷಕ್ಕೂ ಅಧಿಕ ಬಂದಿದೆ. ಅಂದಹಾಗೆ ಇವರ ನಿವಾಸದಲ್ಲಿ ಇರೋದು ಕೇವಲ 2 ಬಲ್ಬುಗಳು. ಹೀಗಿರುವಾಗ ಇಷ್ಟೊಂದು ಬಿಲ್ ಬರಲು ಹೇಗೆ ಸಾಧ್ಯ ಎಂದು ಕಣ್ಣೀರಿಟ್ಟಿದ್ದಾರೆ. ಈ…

ಆಂಧ್ರಪ್ರದೇಶದ ವಿಶಾಖ ಪಟ್ಟಣ ದಲ್ಲಿ ನಡೆದಿರುವ ಮನುಕುಲ ತಲೆ ತಗ್ಗಿಸುವ ಘಟನೆ ನಡೆದಿದೆ..

10 February, 2023
ಆಂಧ್ರಪ್ರದೇಶದ ವಿಶಾಖ ಪಟ್ಟಣ ದಲ್ಲಿ ನಡೆದಿರುವ ಮನುಕುಲ ತಲೆ ತಗ್ಗಿಸುವ ಘಟನೆ ನಡೆದಿದೆ.. ಒರಿಸ್ಸಾ ಮೂಲಕ ಮಹಿಳೆ ಅರೋಗ್ಯ ಸಮಸ್ಯೆ ಇಂದ ವಿಶಾಖ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಸೇರಿರುತ್ತಾಳೆ.. ಆದರೆ ವೈದ್ಯರು ಬದುಕುವ ಸಾಧ್ಯತೆ ಕಮ್ಮಿ ಇದೆ ಎಂದು ಹೇಳುತ್ತಾರೆ.. ಆಗ ಗಂಡ ಹೆಂಡತಿಯನ್ನು ಕರ್ಕೊಂಡು ಒಂದು ಆಟೋ ರಿಕ್ಷಾದಲ್ಲಿ ಊರಿನ ಕಡೆ ಪ್ರಯಾಣ ಮಾಡುತ್ತಾನೆ... ಆತನ ದುರ್ದೈವ ಮಾರ್ಗದ ಮಧ್ಯದಲ್ಲಿ ಹೆಂಡತಿ ತೀರಿಕೊಳ್ಳುತ್ತಾರೆ... ಆಟೋ ಚಾಲಕ ನಾನು ಇನ್ನು ಅಷ್ಟೂ ದೂರ ಶವವನ್ನು ಸಾಗಿಸಲಾರೆ ಎಂದು ತನ್ನ ಬಳಿ ಇದ್ದ ₹2000 ತಗೊಂಡು ತನ್ನ ಗಾಡಿಯಿಂದ ಇಳಿಸಿ ಬಿಡುತ್ತಾನೆ... ಇನ್ನು ಬೇರೆ ದಾರಿಯಿಲ್ಲದೆ 130 ಕಿಲೋಮೀಟರ್ ನಡೆದುಕೊಂಡು ಹೋಗಲು ನಿಷಯ ಮಾಡಿ ಹೊರಡುತ್ತಾನೆ.. ಈ ವಿಷಯ ತಿಳಿದ ಪೊಲೀಸ್(ತಿರುಪತಿ ರಾವ್ ಹಾಗೂ ಕಿರಣ್ ಕುಮಾರ್ )ನವರು ಖರ್ಚಿಗೆ ₹10,000 ಕೊಟ್ಟು ಆಂಬುಲೆನ್ಸ್ ವೆವಸ್ಥೆ ಮಾಡಿ ಊರಿಗೆ ಕಳುಹಿಸಿ ಕೊಡುತ್ತಾರೆ. ಮನಕುಲಕುವ ಘಟನೆ. ಹೆಂಡತಿ ಶವ ಹೆಗಲ ಮೇಲೆ ಒತ್ತು ನಡೆದ…

ತೋಟದ ಮನೆಯಲ್ಲಿ ಅವಿತು ಕುಳಿತ ಚಿರತೆ ಗ್ರಾಮಸ್ಥರು ಆತಂಕ..

09 February, 2023
ತೋಟದ ಮನೆಯಲ್ಲಿ ಅವಿತು ಕುಳಿತ ಚಿರತೆ ಗ್ರಾಮಸ್ಥರು ಆತಂಕ.. ಕೆಆರ್ ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ನಿಂಗೇಗೌಡರು ವಾಸ ಮಾಡುತ್ತಿದ್ದ ಮನೆಯ ಚಿರತೆ ಸೇರಿಕೊಂಡಿದೆ.. ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಎಲ್ಲ ಸೇರಿಕೊಂಡು ಚಿರತೆಯನ್ನು ಕೂಡಿ ಹಾಕಿದ್ದಾರೆ ಅರಣ್ಯ ಇಲಾಖೆಯವರು ಬರುವಂತೆ ಒತ್ತಡ ನೀಡಿದ್ದಾರೆ

ಮುಖ್ಯ ಶಿಕ್ಷಕಿಯನ್ನು ಶಿಕ್ಷಣಾಧಿಕಾರಿಯ ಕಚೇರಿಗೆ ನಿಯೋಜನೆ. ವಿದ್ಯಾರ್ಥಿಗಳ ಪೋಷಕರಿಂದ ಪ್ರತಿಭಟನೆ...!!!!

08 February, 2023
ತುರುವೇಕೆರೆ: ತಾಲೂಕಿನ ಕಸಬಾ ಹೋಬಳಿ, ಕೊಡಿಗೆಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೀಣಾ ಎಂಬ ಮುಖ್ಯ ಶಿಕ್ಷಕಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲಸಕ್ಕಾಗಿ ಯೋಜನೆ ಮಾಡಿಕೊಂಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳ ಪೋಷಕರುಗಳಾದ ರಘುಕುಮಾರ್ ರವರ ನೇತೃತ್ವದಲ್ಲಿ ಇಂದು ಸರ್ಕಾರಿ ಶಾಲೆಯ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ರಘುಕುಮಾರ್ ಮುಖ್ಯ ಶಿಕ್ಷಕಿ ವೀಣಾ ಅವರು, ಬಂದಾಗಿನಿಂದ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಉತ್ತಮವಾಗಿದ್ದು, ಎಸ್, ಎಸ್, ಎಲ್, ಸಿ ,ಫಲಿತಾಂಶ ಜಿಲ್ಲೆಯಲ್ಲಿ ಮೂರನೇ ಸ್ಥಾನಕ್ಕೆ ಕೊಂಡೊಯ್ಯಲು ಈ ಶಿಕ್ಷಕಿಯು ನೀಡುವ ಗುಣಮಟ್ಟದ ಶಿಕ್ಷಣ, ಹಾಗೂ ಇಂಗ್ಲಿಷ್ ಪರಿಣಿತಿ, ಮಕ್ಕಳಲ್ಲೂ ಉತ್ತೇಜಿಸಿ, ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಾಗಿರುತ್ತಾರೆ. ಜೊತೆಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪೆಣಂಬೂತವಾಗಿರುವ ಇಂಗ್ಲಿಷ್ ಭಾಷೆಯನ್ನು ಸುಲಲಿತವಾಗಿ ಮಕ್ಕಳಿಗೆ ಅರ್ಥೈಸುತ್ತಿದ್ದರು, ಆದರೆ ಈ ಮುಖ್ಯ ಶಿಕ್ಷಕಿಯನ್ನು ತಾಲೂಕು ಶಿಕ್ಷಣಾಧಿಕಾರಿಯ ಕಚೇರಿಗೆ ನಿಯೋಜನೆ ಮಾಡಿಕೊಂಡಿರುವುದು ಖಂಡನೀಯ ಎಂದರು. ಈ ಬಗ್ಗೆ ಈ ಶಾಲೆಯ ಎಸ್ ಡಿ ಎಂ…
No Internet Connection