ಹಾಸನ : ಕೊಟ್ಟ ಸಾಲವನ್ನ ವಾಪಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಹೆಣವಾಗಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಲಿಖಿತ್ ಗೌಡ ಕೊಲೆಯಾದ ವ್ಯಕ್ತಿಯಾಗಿದ್ದು, ಸಾಗರ್ ಎಂಬ ವ್ಯಕ್ತಿಗೆ 2.5 ಲಕ್ಷ ಹಣವನ್ನು ನೀಡಿದ ಎನ್ನಲಾಗಿದೆ. ಇನ್ನು ಸಾಲದ ಹಣವನ್ನು ವಾಪಸ್ ನೀಡುವಂತೆ ಲಿಖಿತ್ ಗೌಡ ಕೇಳಿದ್ದರಿಂದ ಸದ್ಯ ನನ್ನ ಬಳಿ ಹಣವಿಲ್ಲ ನಾನು ಕೊಟ್ಟಾಗ ಇಸ್ಕೊ ಬೇಕು ಅಂತ ಬೆದರಿಕೆ ಹಾಕಿದನಂತೆ ಈ ಹಿನ್ನೆಲೆಯಲ್ಲಿ ಮತ್ತೆ ರಾಜಿ ಸಂಧಾನದ ಮೂಲಕ ಪ್ರಕರಣ ತಣ್ಣಗಾಗಿತ್ತು ಆದರೆ ಭಾನುವಾರ ನವೀನ್ ಮತ್ತು ಸಾಗರ್ ಇಬ್ಬರೂ ಮಾರುತಿ ಕಾರಿನಲ್ಲಿ ಬಂದು ಹಣ ಕೊಡುವುದಾಗಿ ಆತನನ್ನು ಕರೆದುಕೊಂಡು ಹೋಗಿ ಕೊಲೆಗೈದಿದ್ದಾರೆ. ಕೊನೆಯದಾಗಿ ಲಿಖಿತ್ ಗೌಡ ಕಳೆದ ಎಂಟು ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಸ್ವಂತ ಕಾರ್ ಕ್ಲಿನಿಕ್ ಮಾಡಿ ವರ್ಷವೂ ಕಳೆದಿರಲಿಲ್ಲ ಆದರೆ ಹಣದ ವಿಚಾರವಾಗಿ ಸ್ನೇಹಿತರೆ ಕೊಲೆ ಮಾಡಿದ್ದು ಮಾತ್ರ ತುಂಬಾ ನೋವಿನ ಸಂಗತಿ.ಒಟ್ಟಾರೆ ಕಷ್ಟದಲ್ಲಿ ಸ್ನೇಹಿತರು ಹಾಕ್ತಾರೆ ಅನ್ನೋ ಮಾತು ಸುಳ್ಳಾಗಿದೆ ದುಶ್ಮನ್ ಕಹಾ ಹೇ ಅಂದ್ರೆ…