ಹಾಸನ : ಕೊಟ್ಟ ಸಾಲವನ್ನ ವಾಪಸ್ ಕೇಳಿದ್ದಕ್ಕೆ ಸ್ನೇಹಿತನನ್ನೇ ಹೆಣವಾಗಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.ಲಿಖಿತ್ ಗೌಡ ಕೊಲೆಯಾದ ವ್ಯಕ್ತಿಯಾಗಿದ್ದು, ಸಾಗರ್ ಎಂಬ ವ್ಯಕ್ತಿಗೆ 2.5 ಲಕ್ಷ ಹಣವನ್ನು ನೀಡಿದ ಎನ್ನಲಾಗಿದೆ. ಇನ್ನು ಸಾಲದ ಹಣವನ್ನು ವಾಪಸ್ ನೀಡುವಂತೆ ಲಿಖಿತ್ ಗೌಡ ಕೇಳಿದ್ದರಿಂದ ಸದ್ಯ ನನ್ನ ಬಳಿ ಹಣವಿಲ್ಲ ನಾನು ಕೊಟ್ಟಾಗ ಇಸ್ಕೊ ಬೇಕು ಅಂತ ಬೆದರಿಕೆ ಹಾಕಿದನಂತೆ ಈ ಹಿನ್ನೆಲೆಯಲ್ಲಿ ಮತ್ತೆ ರಾಜಿ ಸಂಧಾನದ ಮೂಲಕ ಪ್ರಕರಣ ತಣ್ಣಗಾಗಿತ್ತು ಆದರೆ ಭಾನುವಾರ ನವೀನ್ ಮತ್ತು ಸಾಗರ್ ಇಬ್ಬರೂ ಮಾರುತಿ ಕಾರಿನಲ್ಲಿ ಬಂದು ಹಣ ಕೊಡುವುದಾಗಿ ಆತನನ್ನು ಕರೆದುಕೊಂಡು ಹೋಗಿ ಕೊಲೆಗೈದಿದ್ದಾರೆ.
ಕೊನೆಯದಾಗಿ ಲಿಖಿತ್ ಗೌಡ ಕಳೆದ ಎಂಟು ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ. ಸ್ವಂತ ಕಾರ್ ಕ್ಲಿನಿಕ್ ಮಾಡಿ ವರ್ಷವೂ ಕಳೆದಿರಲಿಲ್ಲ ಆದರೆ ಹಣದ ವಿಚಾರವಾಗಿ ಸ್ನೇಹಿತರೆ ಕೊಲೆ ಮಾಡಿದ್ದು ಮಾತ್ರ ತುಂಬಾ ನೋವಿನ ಸಂಗತಿ.ಒಟ್ಟಾರೆ ಕಷ್ಟದಲ್ಲಿ ಸ್ನೇಹಿತರು ಹಾಕ್ತಾರೆ ಅನ್ನೋ ಮಾತು ಸುಳ್ಳಾಗಿದೆ ದುಶ್ಮನ್ ಕಹಾ ಹೇ ಅಂದ್ರೆ ಬಗಲ್ ಮೇ ಹಂದ ಹಾಗೆ ಸ್ನೇಹಿತನಿಂದಲೇ ಹಣದ ವಿಚಾರವಾಗಿ ಕೊಲೆಯಾಗಿದ್ದು ಮಾತ್ರ ದೊಡ್ಡ ದುರಂತವೇ ಸರಿ.
ಹಣವನ್ನ ವಾಪಸ್ ನೀಡದ ಹಿನ್ನೆಲೆಯಲ್ಲಿ ಸದ್ಯ ಕೊಲೆಯಾಗಿರುವ ಲಿಖಿತ್ ಗೌಡ ಹಣವನ್ನ ವಾಪಸ್ ಹಿಂದಿರುಗಿಸುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದ.ಆದರೆ ಹಣವನ್ನ ನೀಡಲು ಹಿಂದೇಟು ಹಾಕಿದ್ದನಂತೆ ನವೀನ್. ಹಾಗಾಗಿ ಇದರಿಂದ ಕೋಪಗೊಂಡ ಲಿಖಿತ್ ಗೌಡ 10 ಲಕ್ಷದ ಚೆಕ್ ಬೌನ್ಸ್ ಕೇಸ್ ಹಾಕಿ ಆಕ್ಟಿವ್ ಹೋಂಡಾ ಬೈಕ್ ಚೀಸ್ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.
ಫೆಬ್ರವರಿ 5ರಂದು ಸಂಜೆ 6:30ಕ್ಕೆ ಹಣ ಕೊಡುವುದಾಗಿ ಕರೆಸಿಕೊಂಡು ನವೀನ ಹಾಗೂ ಸಾಗರ್ ಲಿಖಿತ್ ಗೌಡ ನನ್ನ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹಾಸನ ಬೆಂಗಳೂರು ಮಾರ್ಗವಾಗಿ ಹೊರಟು ಮಧ್ಯ ಭಾಗದಲ್ಲಿ ಎಲ್ಲರ ಮೊಬೈಲನ್ನು ಸ್ವಿಚ್ ಆಫ್ ಮಾಡಿಸಿ ನಂತರ ಹಾಸನ ತಾಲೂಕಿನ ದುದ್ದ ಸಮೀಪದ ಯೋಗಿಹಳ್ಳಿ ಫಾರೆಸ್ಟ್ ಅಲ್ಲಿ ಕರೆದದ್ದು ಕೊಲೆ ಮಾಡಿದ್ದು ಪೊಲೀಸರ ತೀವ್ರ ಶೋಧ ಕಾರ್ಯ ನಡುವೆ ಲಿಖಿತ್ ಗೌಡನ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಆರೋಪಿಗಳ ಎಡೆಮುರಿ ಕಟ್ಟಲು ಈಗಾಗಲೇ ಎರಡು ತಂಡ ರಚನೆ ಮಾಡಿದ್ದಾರೆ. ಇನ್ನು ಲಿಖಿತ್ ಗೌಡನ ಕೊಲೆ ಪ್ರಕರಣ ತಿಳಿಯುತ್ತಿದ್ದಂತೆ ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.